Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಪಂಚಮಸಾಲಿ ಪೀಠದ ಆವರಣದಲ್ಲಿ ಮಂಗಳವಾರ ಕಂಡುಬಂದ ಪೊಲೀಸರ ಸರ್ಪಗಾವಲಿನ ದೃಶ್ಯ

ವಿಜಯ್ ಪ್ರಭಾಸ್ ವಾರ್ತೆ

ವಿಜಯ್ ಪ್ರಭಾಸ್ ವಾರ್ತೆಬೆ ಳ್ಳೂಡಿ, ಏ 14 : ನಗರದ ಹೊರ ವಲಯದ ಶಿವಮೊಗ್ಗ-ಹೊಸಪೇಟೆ ರಸ್ತೆಯ ಪಕ್ಕದ ವೀರಶೈವ ಲಿಂಗಾಯತ ಪಂಚಮಸಾಲಿ ಹರಪೀಠದಲ್ಲಿನ ಹಣಕಾಸು ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಕುರಿತು, ಸೋಮವಾರ ಲೆಕ್ಕಕೊಡಿ ಚಳುವಳಿ, ಹಾಗೂ ಮಠದ ಟ್ರಸ್ಟಿಗಳು ಸಭೆನಡೆಸಿ, ಪೀಠಾಧೀಶರಾದ ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟಿಸಿದಕುರಿತು ಮಠದ ಆವರಣವೆಲ್ಲಾ, ರಾಜ್ಯದ ಪಂಚಮಸಾಲಿ ಬಂಧುಗಳಿಂದ, ಪೊಲೀಸ್ಅಧಿಕಾರಿ, ಸಿಬ್ಬಂದಿಗಳಿಂದ, ಪತ್ರಿಕಾ, ದೃಶ್ಯ ಮಾದ್ಯಮ ಸ್ನೇಹಿತರಿದ ತುಂಬಿತುಳುಕಿತ್ತು.ಮಠಕ್ಕೆ ಸಂಭಂದಿಸಿದ ವಿಷೆಯವಾಗಿ ರಾಜ್ಯದ ಪತ್ರಿಕೆಗಳು,ಮಾದ್ಯಮಗಳು ಪೀಠದ ಆವರಣದಲ್ಲಿ ನಡೆದ ಕಾರ್ಯಚಟುವಟಿಕೆಗಳ ಕುರಿತುಸುದ್ದಿ ಪ್ರಕಟಿಸಿದ ನಂತರ, ಪತ್ರಿಕೆಯು ಮಂಗಳವಾರ ಮಠಕ್ಕೆ ತೆರಳಿದ್ದಸ ಮಯದಲ್ಲಿ, ಮಠದ ಪೀಠಾಧೀಶರಾದ ವಚನಾನಂದ ಶ್ರೀಗಳು ಶ್ರೀಪೀಠದಲ್ಲಿಕುಳಿತಿದ್ದರು. ಮಠಕ್ಕೆ ಬರುತಿದ್ದ ಭಕ್ತರಿಗೆ ಧರ್ಮ ಸಂದೇಶ ನೀಡುತ್ತಾ,ಮಠದಲ್ಲಿನ ಚಟುವಟಿಕೆಗಳ ಕುರಿತು ಸ್ಪಸ್ಟಿಕರಣ ನೀಡುತ್ತಿದ್ದ ದೃಶ್ಯಸಾಮಾನ್ಯವಾಗಿತ್ತು.

ಸೋಮವಾರ ನಡೆದ ಟ್ರಸ್ಟಿಗಳ ಸಭೆಯ ನಂತರಮಠದ ಆಡಳಿತ ಕಛೇರಿಗೆ ಬೀಗ ಮುದ್ರೆ ಹಾಕಿರುವುದು ಕಂಡು ಬಂದಿತು.ಮಠದ ಹೊರಗೆ ನಿಶಬ್ದತೆಯ ವಾತಾವರಣ ನಿರ್ಮಾಣಗೊಂಡಿತ್ತು. ಪೊಲೀಸರಸರ್ಪಗಾವಲಿನ ಕಾವಲು ಮುಂದುವರೆದಿರುವುದು ಕಂಡುಬಂದಿತು. ಪಂಚಮಸಾಲಿ ಪೀಠದ ಆವರಣದಲ್ಲಿ ಕಂ

ಡುಬಂದ ಪೊಲೀಸರ ಸರ್ಪಗಾವಲಿನ ದೃಶ್ಯ

Related Articles

Leave a Reply

Your email address will not be published. Required fields are marked *

Check Also
Close
Back to top button
error: Content is protected !!
Click to listen highlighted text!