ನೀರಿನ ಸಮಸ್ಯೆ ಎದುರಾಗಿದ್ದರೂ ಕೂಡ ಸಮಸ್ಯೆ ಬಗೆಹರಿಸುವಲ್ಲಿ ಪುರಸಭೆಯ ಇಂಜಿನಿಯರ್ ವಿಫಲರಾಗಿದ್ದಾರೆ, ಪುರಸಭೆ ಸದಸ್ಯ ಸಾಬೀರ್ ಅಲಿ
ವಾಲ್ ಗಳು ಕೆಟ್ಟು ಹೋಗಿ ಸುಮಾರು ತಿಂಗಳುಗಳಾದರೂ ಇಂಜಿನಿಯರ್ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ

ನೀರಿನ ಸಮಸ್ಯೆ ಎದುರಾಗಿದ್ದರೂ ಕೂಡ ಸಮಸ್ಯೆ ಬಗೆಹರಿಸುವಲ್ಲಿ ಪುರಸಭೆಯ ಇಂಜಿನಿಯರ್ ವಿಫಲರಾಗಿದ್ದಾರೆ, ಪುರಸಭೆ ಸದಸ್ಯ ಸಾಬೀರ್ ಅಲಿ
ಮಲೇಬೆನ್ನೂರು ಪಟ್ಟಣದ 16 ನೇ ವಾರ್ಡ್ ನಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರೂ ಕೂಡ ಸಮಸ್ಯೆ ಬಗೆಹರಿಸುವಲ್ಲಿ ಪುರಸಭೆಯ ಇಂಜಿನಿಯರ್ ವಿಫಲರಾಗಿದ್ದಾರೆ, ಪಟ್ಟಣದಲ್ಲಿ ವಾಲ್ ಗಳು ಕೆಟ್ಟು ಹೋಗಿ ಸುಮಾರು ತಿಂಗಳುಗಳಾದರೂ ಇಂಜಿನಿಯರ್ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಅಷ್ಟೇ ಅಲ್ಲದೆ ಮೀಟರ್ ಬೋರ್ಡ್ ಗಳ ಬೀಗಗಳು ಸಂಪೂರ್ಣವಾಗಿ ಹಾಳಾಗಿದ್ದು ನೂತನ ಮೀಟರ್ ಡಬ್ಬಿ ಅಳವಡಿಸಲು ಸಾಮಾನ್ಯ ಸಭೆಯ ಮೂಲಕ ಗಮನಕ್ಕೆ ತಂದರೂ ಇನ್ನೂ ಕೆಲಸ ಮಾಡಿಲ್ಲ ಮೀಟರ್ ಡಬ್ಬಿಗಳು ಮುಚ್ಚಲು ಬೀಗ ಹಾಕಲು ಬಾರದೇ ಇರುವುದರಿಂದ ಬೇಸಿಗೆಯಲ್ಲಿ ಆಟ ಆಡುವ ಮಕ್ಕಳು ಮೀಟರ್ ಡಬ್ಬಿ ಒಳಗೆ ಕೈ ಇಟ್ಟು ಪ್ರಾಣಹಾನಿ ಸಂಭವಿಸಿದರೆ ಯಾರು ಹೊಣೆ ಎಂದು ಪುರಸಭೆ ಸದಸ್ಯ ಸಾಬೀರ್ ಅಲಿ ಎ. ರವರು ದೂರಿದರು,ಈ ವಿಚಾರವಾಗಿ ಸುಮಾರು ಸಾರಿ ಇಂಜಿನಿಯರ್ ಗಮನಕ್ಕೆ ತಂದರೂ ಇಂಜಿನಿಯರ್ ತಲೆಗೆ ಹಾಕಿಕೊಳ್ಳದೇ ಮುಂದಿನ ಬಹು ದೊಡ್ಡ ಅಪಾಯಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ ಎಂದು ದೂರಿದರು.*ಬೋರ್ ವೆಲ್ ಸಮಸ್ಯೆ ಬಗೆಹರಿಸಲು ಅಭಿಯಂತರರು ವಿಫಲ ಪ್ರಾಣಹಾನಿ ಸಂಭವಿಸಿದರೆ ಇಂಜಿನಿಯರ್ ಅವರೇ ಹೊಣೆ:ಎಂದು ಪುರಸಭೆ ವಾರ್ಡ್ ನಂ 16ರ ಸದಸ್ಯರಾದ ಸಾಬೀರ್ ಅಲಿ ಎ ರವರು ಪುರಾಸಭೆಯ ಇಂಜಿನಿಯರ್ ಆದಾ ರಾಘವೇಂದ್ರ ರವರು ಹೊಣೆ ಎಂದು ದೂರಿದರು